
ಸಕಲೇಶಪುರ : ಇಂದು ದಿವಂಗತ ಬಿ ಬಿ ಶಿವಪ್ಪರವರ ಧರ್ಮಪತ್ನಿ ಸುಶೀಲಮ್ಮ ರವರ ಮೊದಲನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಸಕಲೇಶಪುರ ತಾಲ್ಲೂಕಿನ ಅರೆಕೆರೆಯ ಸರ್ಕಲ್ ಗೆ ಬಿ ಬಿ ಶಿವಪ್ಪ ವೃತ್ತ ಎಂದು ಹೆಸರಿಡಲಾಯಿತು. ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಉದ್ಘಾಟನೆ ಮಾಡಿದರು .
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಿರುಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಕೊಡ್ಲಿಪೇಟೆ, ಹಾಗೂ ಕಲ್ಮಠದ ಶ್ರಿ ಮಹಾಂತ ಸ್ವಾಮಿಜೀ ಯವರು ವಹಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ನರೇಶ್ ಹಾಗೂ E O ರಾಮಕೃಷ್ಣ, ಬಿ ಬಿ ಶಿವಪ್ಪ ಅಭಿಮಾನಿಗಳ ಬಳಗ ಹಾಗೂ ಅರೆಕೆರೆ ಗ್ರಾಮಸ್ಥರು ಇದ್ದರು.
