
ಹಾಸನ: ಅದಿ ದೇವತೆ ಹಾಸನಾಂಬೆ ಗರ್ಭ ಗುಡಿ ಬಾಗಿಲು ತೆಗೆದು ನಾಲ್ಕನೆ ದಿವಸಕ್ಕೆ ಕಾಲಿಟ್ಟಿದ್ದು, ಭಾನುವಾರದಂದು ಭಕ್ತರ ಸಂಖ್ಯೆಯಲ್ಲಿ ಸಲ್ಪ ಏರಿಕೆ ಕಂಡು ಬಂದಿತು.
ಅನೇಕ ದಾನಿಗಳು ಮಜ್ಜಿಗೆ ಇತರೆಯನ್ನು ಹಾಸನಾಂಬೆ ದೇವಾಲಯಕ್ಕೆ ಬರುವ ಭಕ್ತರಿಗೆ ಸ್ವಯಂ ಸೇವಕರ ಮೂಲಕ ಚೀಲಗಟ್ಟಲೆ ನೀಡಿದರು.
ದೇವಸ್ಥಾನದಲ್ಲಿ ಯಾವ ಗೊಂದಲ ಇಲ್ಲದೇ ಭಕ್ತರು ಅಮ್ಮನವರ ದರ್ಶನ ಮಾಡಿದರು.




