
ಸಕಲೇಶಪುರ : ಇಂದು ನಡೆದ 75 ನೇ ಗಣರಾಜ್ಯೋತ್ಸವ ದಿನದಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಶೇಷವಾಗಿ ಕಡು ಬಡತನ ಹಾಗೂ ಕಷ್ಟದಲ್ಲೂ ಸಾಧನೆಗೈದು ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳಿಗೆ ಆಯ್ಕೆಯಾಗಿರುವ
1) ಮೋಹನ್ ಕುಮಾರ್’, ಅಸಿಸ್ಟೆಂಟ್ ಪ್ರೊಫೆಸರ್,
2) ತಂಗಮ್ಮ ,ಜಿಪಿಎಸ್ಟಿ ಶಿಕ್ಷಕಿ ,
3) ಹರಿಣಾಕ್ಷಿ ,ಜಿಪಿಎಸ್ಟಿ ಶಿಕ್ಷಕಿ,
4) ಜಗದೀಶ್ ದ್ವಿತೀಯ ದರ್ಜೆ ಸಹಾಯಕರು ,ಆರೋಗ್ಯ ಇಲಾಖೆ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಕಲೇಶಪುರ ಶಾಸಕರಾದ ಸಿಮೆಂಟ್ ಮಂಜುನಾಥ್, ಉಪವಿಭಾಗಾಧಿಕಾರಿ ಡಾ.ಶೃತಿ, ಎಂ.ಕೆ. ತಹಸೀಲ್ದಾರ್ ಕೆ.ಪುರಂದರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪುಷ್ಪ, ಡಿವೈಎಸ್ಪಿ ಪ್ರಮೋದ್ ಕುಮಾರ್ ಜೈನ್, ಇತರರು ಇದ್ದರು..

