ಸಕಲೇಶಪುರ : ತಾಲೂಕಿನ ಕಾಗಿನೆರೆಯ ಚಾಮುಂಡಿ ದೇವಿಯ ವಾರ್ಷಿಕ ಪೂಜಾ ಮಹೋತ್ಸವವು ಮೇ 11, 2025ರ ಭಾನುವಾರದಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಕಾಗಿನೆರೆ ದೇವಸ್ಥಾನದಲ್ಲಿ ನಡೆಯಲಿದೆ.

ಕಾಗಿನೆರೆ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಪೂಜೆಯ ದಿನದಂದು ಯಾವುದೇ ರೀತಿಯ ಪ್ರಾಣಿ ಬಲಿ (ಕೋಳಿ, ಹಂದಿ, ಕುರಿ/ಮೇಕೆ) ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಶನಿವಾರ ಸಂಜೆ ಮತ್ತು ಭಾನುವಾರ ಮುಂಜಾನೆ ಯಾವುದೇ ಕಾರ್ಯಕ್ರಮಗಳಿರುವುದಿಲ್ಲ. ಪೂಜಾ ಪ್ರಸಾದವಾಗಿ, ಪೂಜೆಯ ನಂತರ ಸಾಮೂಹಿಕ ಊಟವನ್ನು ದೇವಸ್ಥಾನದ ವತಿಯಿಂದಲೇ ಎಲ್ಲಾ ಭಕ್ತರಿಗೆ ನೀಡಲಾಗುವುದು.

ಎಲ್ಲಾ ಭಕ್ತರು ಈ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆಯಲು ಕೋರಲಾಗಿದೆ.

ವ್ಯವಸ್ಥಾಪಕ ಸಮಿತಿ,ಚಾಮುಂಡಿ ದೇವಿ ದೇವಸ್ಥಾನ,ಕಾಗಿನೆರೆ, ಸಕಲೇಶಪುರ ತಾಲೂಕು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *