ಸಕಲೇಶಪುರ: ಗುಡ್ ಫ್ರೈಡೆ ಪ್ರಯುಕ್ತ ಇಂದು ದಯಾಳು ಮಾತೆ ದೇವಾಲಯದ ಚರ್ಚಿನ ಆವರಣದಲ್ಲಿ ಯೇಸುಕ್ರಿಸ್ತರ ಜೀವಂತ ಶಿಲುಬೆಗೇರಿಸುವ ದೃಶ್ಯವನ್ನು ಪ್ರಾತ್ಯಕ್ಷಿಕೆಯ ಮೂಲಕ ಭಕ್ತಾದಿಗಳು ಪ್ರದರ್ಶನವನ್ನು ನೀಡಿದರು.ಈ ಸಂದರ್ಭದಲ್ಲಿ ಕ್ರೈಸ್ತ ಬಾಂದವರು ಶ್ರದ್ಧಾ ಭಕ್ತಿಯಿಂದ ಮತ್ತು ಏಸು ಕ್ರಿಸ್ತನನ್ನು ಶಿಲಿಗೆ ಏರಿಸಿದ ಈ ಸನ್ನಿವೇಶವನ್ನು ನೆನಸಿಕೊಂಡು ದುಖತಪ್ತರಾಗಿ ಶ್ರದ್ದಾ ಭಕ್ತಿಯಿಂದ ಏಸುವಿನ ನಾಮಸ್ಮರಣೆಯನ್ನು ಮಾಡಿದರು.ಏಸುಕ್ರಿಸ್ತನ ಪಾತ್ರದಾರಿಯಾಗಿ ಸಂತೋಷ್ ಅವರು ಅದ್ಬುತವಾಗಿ ಪ್ರದರ್ಶನ ನೀಡಿದರು.ಏಸುವನ್ನು ಶಿಲಿಬೆಗೆ ಏರಿಸುವಂತಹ ದೃಶ್ಯ ವೀಕ್ಷಿಸಿದ ಕ್ರೈಸ್ತ ಬಾಂದವರ ಕಣ್ಣುಗಳಲ್ಲಿ ಕಣ್ಣೀರಧಾರೆ ಹರಿಯುವ ಸನ್ನಿವೇಶ ವು ನೋಡುಗರ ಮನಸ್ಸಿಗೆ ಮತ್ತಷ್ಟು ದುಖತಪ್ತರನ್ನುಂಟುಮಾಡಿತು.ಈ ಸಂದರ್ಭದಲ್ಲಿ ಕ್ರೈಸ್ತ ಭಾಂದವರಾದ ಎಡ್ವಿನ್ ಪೆರೆರಾ, ಅನೀಲ್, ಲೀನಾಕಾರ್ಲೋ, ಜೋಸೆಫ್, ಶರತ್,ಹಾಗೂ ಮುಖಂಡರಾದ ರಾಕೇಶ್ ಮೆನೇಜಸ್, ಆನಂದ್ ಲಿಯೋವಾಸ್, ವಲೇರಿಯನ್ ಪಾಯ್ಸ್, ಅವಿನಾಶ್, ವರ್ಗೀಸ್, ಸಿ.ಆರ್.ಪೌಲ್, ಸಲ್ಡಾನಾ ಇತರರು ಇದ್ದರು.

ವರದಿಗಾರರು : ಜೈಭೀಮ್ ಮಂಜು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *